ಹರಳೆಣ್ಣೆಯಲ್ಲಿ ಇರುವಂತಹ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಯಾಕೆಂದರೆ ಇದರ ಬಳಕೆ ಮಾಡುವ ಜನರು ತುಂಬಾ ಕಡಿಮೆ. ಆದರೆ ಹರಳೆಣ್ಣೆಯು ನಮ್ಮ ಆರೋಗ್ಯ ಹಾಗೂ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ತೂಕ ಇಳಿಸಲು ಬಯಸುವಂತಹ ಜನರಿಗೆ ತುಂಬಾ ನೆರವಿಗೆ ಬರಲಿದೆ. ಹೌದು, ಹರಳೆಣ್ಣೆ ಬಳಸಿಕೊಂಡು ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸಬಹುದು. ಹೆಚ್ಚಿನವರು ಎಣ್ಣೆಯು ತೂಕ ಇಳಿಸುವವರಿಗೆ ಒಳ್ಳೆಯದಲ್ಲ ಎನ್ನುವ ಭಾವನೆ ಹೊಂದಿರುವರು. ಆದರೆ ಕೊಬ್ಬು ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕು. ಆದರೆ ಅದು ಅತಿಯಾದ ವೇಳೆ ಸಮಸ್ಯೆಗಳು ಕಾಡಲು ಆರಂಭಿಸುವುದು. ಇದರಿಂದ ಕೊಬ್ಬು ದೇಹದಲ್ಲಿ ಹಿತಮಿತವಾಗಿ ಇರಬೇಕು. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕೂಡ ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು.
1.ಸಂಪೂರ್ಣವಾಗಿ ಕೊಬ್ಬು ಕಡೆಗಣಿಸಬೇಡಿ
ಕೊಬ್ಬು ನಮ್ಮ ದೇಹಕ್ಕೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ ಮತ್ತು ಇದರಿಂದ ನೀವು ಎಣ್ಣೆಗೆ ಸಂಪೂರ್ಣವಾಗಿ ಇಲ್ಲವೆಂದು ಹೇಳಲು ಆಗಲ್ಲ.
2.ಹರಳೆಣ್ಣೆಯು ಹೇಗೆ ತೂಕ ಕಳೆದುಕೊಳ್ಳಲು ನೆರವಾಗುವುದು?
ಹರಳೆಣ್ಣೆಯಲ್ಲಿ ವಿವಿಧ ರೀತಿಯ ಲಾಭಗಳು ಇರುವ ಪರಿಣಾಮವಾಗಿ ಇದನ್ನು ಹಲವು ವಿಧದಿಂದ ಬಳಸಲಾಗುತ್ತದೆ. ಇದು ಮಲಬದ್ಧತೆ ನಿವಾರಣೆ ಮಾಡುವುದರಿಂದ ಹಿಡಿದು ಕೂದಲಿ ಬೆಳವಣಿಗೆಗೆ ಕೂಡ ನೆರವಾಗುವುದು. ಈ ಎಣ್ಣೆಯಲ್ಲಿ ಇರುವಂತಹ ತುಂಬಾ ಲಾಭಕಾರಿ ಅಂಶವೆಂದರೆ ಇದರಲ್ಲಿನ ರಾಸಾಯನಿಕ ಸಂಯೋಜನೆಯು ಸುಲಭವಾಗಿ ತೂಕ ಕಳೆದುಕೊಳ್ಳುವಂತೆ ಮಾಡುವುದು. ಈ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ರಿಕಿನೋಲಿಕ್ ಆಮ್ಲವಿದ್ದು, ಇದು ಒಳ್ಳೆಯ ಟ್ರೈಗ್ಲಿಸರೈಡ್ ಕೊಬ್ಬಿನಾಮ್ಲ ವಾಗಿದ್ದು, ಸಾಮಾನ್ಯವಾಗಿ ಇದು ಯಾವುದರಲ್ಲೂ ಕಂಡುಬರುವುದಿಲ್ಲ.
3.ಮನೆಯಲ್ಲಿ ಹರಳೆಣ್ಣೆ ಇದ್ದರೆ ಇಷ್ಟೇ ಸಾಕು, 'ಮಲಬದ್ಧತೆ' ನಿವಾರಿಸಬಹುದು!
ಇದೊಂದು ಬೊಜ್ಜು ವಿರೋಧಿ ಅಂಶವಾಗಿದೆ ಮತ್ತು ವಿರೇಚಕವಾಗಿ ಕೆಲಸ ಮಾಡುವ ಕಾರಣದಿಂದಾಗಿ ತೂಕ ಕಳೆದುಕೊಳ್ಳಲು ಸಹಕಾರಿ ಮತ್ತು ಬೇಕಾದಂತೆ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ನಿಯಮಿತವಾಗಿ ಆಹಾರ ಕ್ರಮದಲ್ಲಿ ಹರಳೆಣ್ಣೆ ಸೇವನೆ ಮಾಡಿದರೆ ಅದರಿಂದ ಚಯಾಪಚಯ ಕ್ರಿಯೆಯು ಹೆಚ್ಚಾಗುವುದು. ಇದರ ಪರಿಣಾಮವಾಗಿ ಬೇಗನೆ ತೂಕ ಇಳಿಸಲು ಸಹಕಾರಿ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೆಚ್ಚಿಸುತ್ತದೆ.
4.ಚಯಾಪಚಯ ಕ್ರಿಯೆ ಸುಧಾರಿಸುವುದು
ದೇಹದಲ್ಲಿ ನೀರಿನಾಂಶ ನಿಲ್ಲುವುದು ತೂಕ ಹೆಚ್ಚಳವಾಗಲು ಮತ್ತೊಂದು ಕಾರಣವಾಗಿದೆ. ಆದರೆ ಹರಳೆಣ್ಣೆಯು ಈ ಸಮಸ್ಯೆ ನಿವಾರಣೆ ಮಾಡಲು ನೆರವಾಗುವುದು. ಹರಳೆಣ್ಣೆ ಹಚ್ಚಿಕೊಳ್ಳುವುದರಿಂದ ಅಥವಾ ಸೇವನೆ ಮಾಡಿದರೆ ಅದು ಹೊಟ್ಟೆ ಮತ್ತು ಕರುಳನ್ನು ಶುದ್ಧೀಕರಿಸುವುದು ಮತ್ತು ಚಯಾಪಚಯ ಕ್ರಿಯೆ ಸುಧಾರಣೆ ಮಾಡಲು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶುದ್ಧೀಕರಿಸುವುದು ಮತ್ತು ದೇಹವು ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುವುದು.
ಇದನ್ನು ಹೇಗೆ ಸೇವಿಸಬೇಕು
ಬೇರೆಲ್ಲಾ ಎಣ್ಣೆಗಳಂತೆ ಹರಳೆಣ್ಣೆಯು ಒಳ್ಳೆಯ ರುಚಿ ಹೊಂದಿಲ್ಲ ಮತ್ತು ಇದು ಒಂದು ಕಟು ಪರಿಮಳ ಹೊಂದಿದೆ. ಸ್ವಲ್ಪ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಆಗ ನಿಮಗೆ ತೂಕ ಕಳೆದುಕೊಳ್ಳಲು ನೆರವಾಗಲಿದೆ ಮತ್ತು ಆರೋಗ್ಯವು ಸುಧಾರಣೆ ಆಗುವುದು. ವಯಸ್ಸು, ಸಹಿಷ್ಣುತೆ ಮತ್ತು ಉದ್ದೇಶವನ್ನು ನೋಡಿಕೊಂಡು ನಿಮ್ಮ ಅಗತ್ಯಕ್ಕೆ ಹರಳೆಣ್ಣೆ ಬಳಸಿಕೊಳ್ಳಿ.
5.ಚರ್ಮದ ಕಾಂತಿ-ಆರೋಗ್ಯವೃದ್ಧಿಗೆ ಒಂದೆರಡು ಚಮಚ ಹರಳೆಣ್ಣೆ ಸಾಕು!
ತೂಕ ಕಳೆದುಕೊಳ್ಳಲು ಬಯಸುತ್ತಿದ್ದರೆ, ಆಗ ನೀವು ದಿನಕ್ಕೆ ಒಂದು ಚಮಚ ಎಣ್ಣೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ನಿಮಗೆ ಇದರ ರುಚಿ ಹಿಡಿಸದೆ ಇದ್ದರೆ ಆಗ ನೀವು ಜ್ಯೂಸ್ ಅಥವಾ ಶುಂಠಿ ರಸಕ್ಕೆ ಇದನ್ನು ಹಾಕಿಕೊಂಡು ಕುಡಿಯಬೇಕು. ಇದರಿಂದ ತೂಕ ಇಳಿಸುವ ನಿಮ್ಮ ಗುರಿಯನ್ನು ಬೇಗನೆ ಸಾಧಿಸಲು ಸಾಧ್ಯವಾಗಲಿದೆ. ಇದರ ಹೊರತಾಗಿ ಹರಳೆಣ್ಣೆಯನ್ನು ನೀವು ಮೈಗೆ ಹಚ್ಚಿಕೊಂಡರೂ ಅದು ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಹೊಟ್ಟೆಯ ಭಾಗಕ್ಕೆ ಬಿಸಿ ಮಾಡಿಕೊಂಡ ಹರಳೆಣ್ಣೆ ಹಚ್ಚಿಕೊಂಡರೆ ಆಗ ಖಂಡಿತವಾಗಿಯೂ ಅದು ನೆರವಾಗುವುದು.
6.ಎಚ್ಚರಿಕೆ
ಹರಳೆಣ್ಣೆಯು ನಿಮಗೆ ತುಂಬಾ ಆರೋಗ್ಯಕಾರಿ ಮತ್ತು ಇದು ತೂಕ ಇಳಿಸಲು ನಿಮಗೆ ನೆರವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀವು ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಕೂಡ ಮಾಡಿಕೊಂಡು ಹೋಗಬೇಕು. ಇದರಲ್ಲಿ ಒಳ್ಳೆಯ ವಿರೇಚಕ ಗುಣವಿರುವ ಕಾರಣದಿಂದಾಗಿ ಇದನ್ನು ಎಚ್ಚರಿಕೆಯಿಂದ ಕುಡಿಯಬೇಕು ಮತ್ತು ಕೆಲವೊಂದು ಸಂದರ್ಭದಲ್ಲಿ ಅತಿಸಾರದಂತಹ ಪರಿಸ್ಥಿತಿ ನಿರ್ಮಾಣ ಮಾಡಬಹುದು. ಹರಳೆಣ್ಣೆ ಸೇವನೆ ಜತೆಗೆ ನೀವು ತೂಕ ಇಳಿಸಲು ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಇದರಲ್ಲಿ ಮುಖ್ಯವಾಗಿ ಆರೋಗ್ಯಕಾರಿ ಆಹಾರ, ಸಮತೋಲಿನ ಆಹಾರ ಕ್ರಮ ಮತ್ತು ನಿಯಮಿತ ವ್ಯಾಯಾಮವು ಅಗತ್ಯವಾಗಿರುವುದು.
7.ಹರಳೆಣ್ಣೆಯನ್ನು ಕಣ್ಣಿಗೆ ಹಾಕುವುದರಿಂದ ಕಣ್ಣು ನೋವು ದೂರವಾಗುತ್ತದೆ .
8.ಹರಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆನೋವು , ಕಣ್ಣು ಉರಿ , ಕಣ್ಣು ಕೆಂಪಗಾಗುವುದು ಮತ್ತು ದೇಹದ ಉಷ್ಣತೆ ಕಡಿಮೆಯಾಗುತ್ತದೆ .
9.ಹರಳೆಣ್ಣೆಯಲ್ಲಿ ಅಭ್ಯಂಗ ಸ್ನಾನ ಮಾಡಿದರೆ ವಾಯು ಕಾಯಿಲೆಗಳು ಗುಣವಾಗುತ್ತದೆ . ದೇಹದ ಆರೋಗ್ಯ ಸುಧಾರಿಸುತ್ತದೆ.
10.ಬಿಸಿ ಹಾಲು ಅಥವಾ ಕಾಫಿಯೊಂದಿಗೆ ಅಥವಾ ಶುಂಠಿಯ ರಸದೊಂದಿಗೆ ಹರಳೆಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ದೂರವಾಗುತ್ತದೆ . ಮಲಬದ್ಧತೆಗೆ ಇದು ಒಂದು ಉತ್ತಮ ಔಷಧ
11.ಒಂದು ಚಮಚ ಹರಳೆಣ್ಣೆಗೆ 1 ಚಮಚ ಶುಂಠಿ ರಸ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಸೈಂಧವ ಲವಣ ಬೆರೆಸಿ ತೆಗೆದುಕೊಂಡರೆ ಮಂಡಿ ಮತ್ತು ಕೀಲುಗಳಲ್ಲಿ ಉರಿ ಕಡಿಮೆಯಾಗುತ್ತದೆ
12.ಚಿಕ್ಕ ಮಕ್ಕಳಿಗೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಲಾಗದೆ ರಚ್ಚೆ ಹಿಡಿದು ಅಳುತ್ತಾರೆ, ಅಂತಹ ಸಮಯದಲ್ಲಿ, ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ಹೊಕ್ಕಳು, ತಲೆಗೆ, ಗುಪ್ತಾಂಗಕ್ಕೆ ಲೇಪಿಸಿದರೆ ಶೀಘ್ರ ಉಪಶಮನವಾಗಿ ರಚ್ಚೆ ನಿಲ್ಲಿಸುತ್ತಾರೆ. ಹರಳೆಣ್ಣೆಯಲ್ಲಿ ಹಿರಿಯರು ಸಹ ಇದೇರೀತಿ ಮಾಡುವುದರಿಂದ ಮೂತ್ರದಲ್ಲುರಿ, ಕಿಬ್ಬೊಟೆನೋವು, ಕಣ್ಣುಗಳ ಉರಿ ಮಾಯವಾಗುತ್ತೆ.
13. ಚಿಕ್ಕ ಮಕ್ಕಳಿಗೆ, ತಾಯಿಹಾಲು ಅಥವಾ ಹಸುವಿನ ಹಾಲಿನಲ್ಲಿ 4-5 ಹನಿ ಕಾಯಿಸಿದ ಹರಳೆಣ್ಣೆ ಕಲಸಿ ಕುಡಿಸುವುದರಿಂದ, ಸುಖಬೇಧಿಯಾಗಿ, ಹೊಟ್ಟೆ ಶುಭ್ರವಾಗುತ್ತೆ, ಹೊಟ್ಟೆನೋವು, ಅಗ್ನಿಮಾಂದ್ಯ ನಿವಾರಣೆಯಾಗಿ, ಹಸಿವು ಹೆಚ್ಚುತ್ತೆ.
14. ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ಚಿಕ್ಕ ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ 1-2 ಚಮಚ ಕುಡಿಸುವುದರಿಂದ, ಸುಖಭೇದಿಯಾಗಿ ಹೊಟ್ಟೆಯಲ್ಲಿನ ಕಲ್ಮಶಗಳೆಲ್ಲ ಮಲಮೂತ್ರದಲ್ಲಿ ಹೊರಬಂದು, ಹೊಟ್ಟೆ ಶುಭ್ರವಾಗಿ, ಹಸಿವು ಹೆಚ್ಚಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತವೆ. ಹಿರಿಯರು ಸಹ ಇದೇ ರೀತಿಯಾಗಿ ಮಾಡಬಹುದು.
15. ದೃಷ್ಟಿ ಉತ್ತಮಗೊಳ್ಳುತ್ತೆ, ಮೂಗು, ಕೈಕಾಲು ನೋವು ಉರಿ ಮಾಯವಾಗಿ ದೇಹವು ಹಗುರವಾಗುತ್ತೆ. ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತೆ.
16. ಹರಳು ಎಲೆಗೆ, ಹರಳೆಣ್ಣೆ ಲೇಪಿಸಿ, ಬೆಂಕಿ ಕೆಂಡದಮೇಲೆ ಹಾಕಿ, ಉಗರು ಬೆಚ್ಚಗೆ ಮಾಡಿ, ರಕ್ತ ಕುರುವಿನ ಮೇಲೆ ಹಾಕಿ ಕಟ್ಟಿದರೆ, ಕುರು ಹೊಡೆದು, ಕಿವು ಹೊರಬಂದು, ಗಾಯ ಶೀಘ್ರ ವಾಸಿಯಾಗುತ್ತೆ. 17.ಹರಳೆಣ್ಣೆ ಹಾಗು ಕೊಬ್ಬರಿ ಎಣ್ಣೆಯನ್ನು ಸಮನಾಗಿ ಕಲಸಿ,ರಾತ್ರಿವೇಳೆ ಹೊಟ್ಟೆಗೆ ಲೇಪಿಸಬೇಕು, ಈಗೆ 2-3 ದಿನ ಮಾಡುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳು ಸತ್ತು ಮಲದಲ್ಲಿ ಹೊರ ಬರುತ್ತವೆ. ದೇಹಕ್ಕೆಲ್ಲ ಮಸಾಜ್ ಮಾಡಿಕೊಂಡು 2 ಗಂಟೆಯ ನಂತರ ಸೀಗೆಕಾಯಿ ಬಳಸಿ ಬಿಸಿನೀರಲ್ಲಿ ಸ್ನಾನ ಮಾಡುವುದರಿಂದ ರಾತ್ರಿ ಸಮಯದಲ್ಲಿ ಸುಖನಿದ್ರೆ ಬರುತ್ತೆ. ದೇಹದಲ್ಲಿನ ಚರ್ಮದ ಆರೋಗ್ಯ ಕಾಪಾಡಿ, ಚರ್ಮದಲ್ಲಿ ನೆರಿಗೆಗಳು ಬರದಂತೆ ತಡೆಯೊಡ್ಡಿ, ವಯಸ್ಸಾದವರು ಸಹ ಯುವಕರಂತೆ ಕಾಣಲು ಸಹಕರಿಸುತ್ತೆ.
18.ಅಂಗೈ, ಅಂಗಾಲು, ಹಿಮ್ಮುಡಿ, ತುಟಿ ಹೊಡೆದು ರಕ್ತ ಸುರಿಯುತ್ತಿರುತ್ತೆ,ಅಂತಹ ಸಮಯದಲ್ಲಿ ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ಚೆನ್ನಾಗಿ ಮಸಾಜ್ ಮಾಡ್ಬೇಕು, ಈಗೆ 8-10 ದಿನ ಮಾಡಿದರೆ, ಒರಟು ಚರ್ಮವು ಮೃದುವಾಗಿ, ಸಮಸ್ಯೆ ದೂರವಾಗುತ್ತೆ.
19.ಮಲಬದ್ಧತೆಗೆ ಹರಳೆಣ್ಣೆ ಬಿಸಿಮಾಡಿ, ವಯಸ್ಸಿಗೆ ತಕ್ಕಂತೆ ಕುಡಿದರೆ, ಮಲವಿಸರ್ಜನೆ ಸುಗುಮವಾಗಿ, ಹೊಟ್ಟೆಯಲ್ಲಿನ ಕಲ್ಮಶಗಳೆಲ್ಲ ಹೊರಬಂದು, ಹೊಟ್ಟೆ ಶುಭ್ರವಾಗುತ್ತೆ.
20.ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ, ಕೂದಲು ಉದರುವುದು ನಿಲ್ಲುತ್ತೆ, ತಲೆಯಲ್ಲಿನ ಸಿಬ್ಬು, ಹೊಟ್ಟು ನಿವಾರಣೆಯಾಗಿ ಮೆದಳಿನಲ್ಲಿರುವ, ವಿಷ ಪದಾರ್ಥಗಳು, ಕಲ್ಮಶಗಳು ಹೊರಬಂದು, ಮೆದಳಿನ ಕಾರ್ಯಕ್ಷಮತೆ ಹೆಚ್ಜಿ, ಸುಗುಮವಾಗಿ ಕಾರ್ಯನಿರ್ವಹಿಸುತ್ತೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ.
21. ಕೀಲುನೋವು ಊತ ಇದ್ದಾಗ, ಹರಳು ಎಲೆಗಳಿಗೆ, ಹರಳೆಣ್ಣೆ ಲೇಪಿಸಿ, ಬೆಂಕಿಕೆಂಡದ ಮೇಲೆ ಹಾಕಿ ಬಿಸಿಮಾಡಿ, ಕೀಲಿನಮೇಲೆ ಹಾಕಿ ಕಟ್ಟುಕಟ್ಟಿದರೆ, ಶೀಘ್ರ ನೋವು, ಊತ ನಿವಾರಣೆಯಾಗುತ್ತೆ.
22.ಭೂನೆಲ್ಲಿ ಹಾಗು ಹರಳು ಎಲೆ ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ದಿನ ಕುಡಿಯುತ್ತಾ ಬಂದರೆ ಹಳದಿ ಕಾಮಾಲೆ (ಜಾಂಡಿಸ್) ಗುಣವಾಗುತ್ತೆ.
23.ದೇಹದಲ್ಲಿನ ಕಪ್ಪು ಮಚ್ಚೆಗಳಿಂದ ಬಾಧಿಸುತ್ತಿದ್ದರೆ, ಹರಳು ಬೀಜಗಳನ್ನು ಹೊಡೆದು, ಹೊಟ್ಟು ತೆಗೆದು ಬಿಸಾಡಿ, ಒಳಗಿನ ಬೇಳೆಯನ್ನು 100 ಗ್ರಾಂ ಹಾಗು ಶುಂಠಿ 15 ಗ್ರಾಂ ತೆಗೆದುಕೊಂಡು, ನುಣ್ಣಗೆ ಅರೆದು, ಬೆಳಿಗ್ಗೆ ಸಂಜೆ ಒಂದು ಗೋಲಿಗಾತ್ರ, ಉಗರು ಬೆಚ್ಚಗಿನ ನೀರಲ್ಲಿ 3-4 ತಿಂಗಳು ತೆಗೆದುಕೊಂಡರೆ, ದೇಹದಲ್ಲಿನ ಕಪ್ಪು ಮಚ್ಚೆಗಳ ಸಮಸ್ಯೆ ನಿವಾರಣೆಯಾಗುತ್ತೆ.
24.ದಿನ ರಾತ್ರಿವೇಳೆ ಹರಳು ಎಲೆಗಳನ್ನು ಜಜ್ಜಿ, ಉಗರು ಬೆಚ್ಚಗೆ ಕಾಯಿಸಿದ ಹರಳೆಣ್ಣೆಯಲ್ಲಿ ಕಲಸಿ, ಕಿಬ್ಬೊಟ್ಟೆಯ ಮೇಲೆ ಹಾಕಿ ಕಟ್ಟುಕಟ್ಟಿದರೆ, ಋತಸ್ರಾವ ಸಮಸ್ಯೆಗಳು ನಿವಾರಣೆಯಾಗುತ್ತೆ.
25.ಹೊಟ್ಟು ತೆಗೆದ ಬೀಜಗಳನ್ನು ರಾತ್ರಿಯಲ್ಲ ಮೊಸರಲ್ಲಿ ನೆನಸಿಟ್ಟು, ಬೆಳಿಗ್ಗೆ ನುಣ್ಣಗೆ ಅರೆದು ನವೆ, ದದ್ದುಗಳ ಮೇಲೆ ಲೇಪಿಸುವುದರಿಂದ ವಾಸಿಯಾಗುತ್ತೆ.
26.ಒಂದು ಚಮಚ ಹರಳೆಣ್ಣೆ, ಒಂದು ಚಮಚ ನಿಂಬೇರಸ, ಒಂದು ಚಮಚ ಜೇನುತುಪ್ಪ, ಮೂರನ್ನು ಚೆನ್ನಾಗಿ ಮಿಶ್ರಣಮಾಡಿ, ಮುಖಕ್ಕೆ ಲೇಪನ ಮಾಡಿ, ಒಂದು ಗಂಟೆಯ ನಂತರ, ಕಡಲೆಹಿಟ್ಟಿನಿಂದ, ಮುಖ ತೊಳೆಯುವುದರಿಂದ, ಮುಖದಲ್ಲಿನ ಕಪ್ಪು ಕಲೆಗಳು ಮಯವಾಗಿ, ಮೊಡವೆಯಿಂದಾದ ರಂಧ್ರಗಳು ಮುಚ್ಚಿಕೊಂಡು, ಚರ್ಮವು ಮೃದುವಾಗಿ, ಕಾಂತಿಯಿಂದ ಹೊಳೆಯುತ್ತೆ.
Comments
Post a Comment