ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ಪ್ರಸಕ್ತ ಹಣದುಬ್ಬರ ದರ ಶೇ.28ರ ಪ್ರಕಾರ ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿ ಭತ್ಯೆ (ಡಿಆರ್ ) ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಲು ಸರಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಜನವರಿಯಿಂದ ಈ ಭತ್ಯೆಯ ಪ್ರಯೋಜನ ದೊರೆಯಲಿದೆಯಾದರೂ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಯಾಗಿಲ್ಲ. ಕೊರೊನಾ ಬಿಕ್ಕ
ಟ್ಟಿನಿಂದಾಗಿ 2021ರ ಜುಲೈವರೆಗೆ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ತಡೆಹಿಡಿಯಲು ಹಣಕಾಸು ಸಚಿವಾಲಯ 2020ರ ಏಪ್ರಿಲ್ ನಲ್ಲಿ ನಿರ್ಧರಿಸಿತ್ತು.
7ನೇ ವೇತನ ಆಯೋಗದ ಸೂಚನೆಯ ಪ್ರಕಾರ, ಕೇಂದ್ರ ನೌಕರರಿಗೆ ತುಟ್ಟಿಭತ್ಯೆಯ ಜೊತೆಗೆ ಪ್ರಯಾಣ ಭತ್ಯೆ-ಟಿಎ ಕೂಡ ಹೆಚ್ಚಾಗಲಿದೆ ಎಂದು ವರದಿಗಳು ಹೇಳಿವೆ. ಕೇಂದ್ರ ನೌಕರರಿಗೆ ಟಿಎ ಶೇ.8ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.
ಈ ಮಧ್ಯೆ, ವೇತನ ನೀತಿ 2019ರ ಕರಡು ನಿಯಮಗಳನ್ನು ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ, ಈ ಹಿನ್ನೆಲೆಯಲ್ಲಿ ನೌಕರರ ವೇತನ ಕಡಿತವನ್ನು ಮುಂದಿನ ಆರ್ಥಿಕ ವರ್ಷದಿಂದ ಅಂದರೆ ಏಪ್ರಿಲ್ 2021ರಿಂದ ಕಡಿತ ಮಾಡುವ ಸಾಧ್ಯತೆ ಇದೆ.
EmoticonEmoticon